ಸಾಹಿತ್ಯ: ಆರ್.ಎನ್.ಜಯಗೋಪಾಲ್
ಗಾಯಕರು: ಪಂಕಜ್ ಉಧಾಸ್
ಕವಿತಾ ಕೃಷ್ಣಮೂರ್ತಿ
ಅರ್ಚನಾ ಉಡುಪ
ಗಂಡು :ಬರೆಯದ ಮೌನದ ಕವಿತೆ
ಹೆಣ್ಣು :ಹಾಡಾಯಿತು
ಗಂಡು :ಎದೆಯಲಿ ನೆನಪಿನ ನೋವು
ಹೆಣ್ಣು :ಸುಖ ತಂದಿತು
ಗಂಡು :ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಹೆಣ್ಣು :ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಗಂಡು :ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ
ನಡೆ ಎಂದಿದೆ
ಗುರಿ ತೋರಿದೆ
ಹೆಣ್ಣು :ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಸಹಕಾರ
ಹೆಣ್ಣು :ಓ...ಹೂವ ಕಂಪು ಪರರಿಗಾಗಿ
ಸಕಲ ಜನ್ಮವು
ಪರರ ಬಾಳು ಬೆಳಗಿದಾಗ
ಬಾಳು ಪೂರ್ಣವು
ಗಂಡು :ಓ...ಕಾಲ ಬರೆದ ಹೊಸತು ಹಾಡು
ಹಾಡಲಾರೆನು
ಮನದ ಪುಟದೀ ಬರೆದ ಗೀತೆ
ಮರೆಯಲಾರೆನು
ಹೆಣ್ಣು :ಎಲ್ಲಿಯ ಬಂದವು ಕಾಣೆ
ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ
ನನ್ನೀ ಹೃದಯದ ಭಾವ
ಗಂಡು :ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಹೆಣ್ಣು :ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ
ನಡೆ ಎಂದಿದೆ
ಗುರಿ ತೋರಿದೆ
ಗಂಡು :ಓ...ಯಾವ ಹೂವು ಯಾರ ಮುಡಿಗೊ
ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ
ನನ್ನ ತೋಟದೀ
ಹೆಣ್ಣು :ಓ...ತಂತಿ ಹರಿದ ವೀಣೆಯಲ್ಲಿ
ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ
ಸಾಟಿ ಕಾಣೆನು
ಗಂಡು :ಬಾಳಲಿ ಪಡೆದದು ಏನೋ
ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ
ಮುಂದೆ ತರುವುದು ಏನೋ
ಹೆಣ್ಣು :ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಗಂಡು :ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ
ನಡೆ ಎಂದಿದೆ
ಗುರಿ ತೋರಿದೆ